ಮತ್ತೆ ಒಂದಾದ ಭಂಡಾರಿ ಸಹೋದರರು: ಹೊಸ ಸಿನಿಮಾಗೆ ನಾಯಕಿಯಾಗಿ ಕೆ.ಜಿ.ಎಫ್ ನಟಿ ಶ್ರೀನಿಧಿ ಶೆಟ್ಟಿ?

ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲೊಂದಾದ ನಿರ್ದೇಶಕ ಅನುಪ್ ಭಂಡಾರಿ ಹಾಗೂ ನಟ ನಿರೂಪ್ ಭಂಡಾರಿ ಮತ್ತೊಮ್ಮೆ ಹೊಸ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ಕಿಚ್ಚ ಸುದೀಪ್ ಅವರೊಂದಿಗಿನ ‘ಬಿಲ್ಲ ರಂಗ ಬಾಷಾ’ ಚಿತ್ರದಲ್ಲಿ ನಿರತರಾಗಿರುವ ಅನುಪ್ ಭಂಡಾರಿ, ಸೈಲೆಂಟ್ ಆಗಿ ತಮ್ಮ ಸಹೋದರನೊಂದಿಗೆ ಮತ್ತೊಂದು ಪ್ರಾಜೆಕ್ಟ್ ಆರಂಭಿಸಿರುವುದು ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ.

ಕುಮಟಾದಲ್ಲಿ ರಹಸ್ಯ ಶೂಟಿಂಗ್!

ಇನ್ನೂ ಹೆಸರಿಡದ ಈ ಹೊಸ ಸಿನಿಮಾದ ಚಿತ್ರೀಕರಣ ಈಗಾಗಲೇ ಕುಮಟಾ ಸುತ್ತಮುತ್ತ ಆರಂಭವಾಗಿದೆ ಎಂದು ವರದಿಯಾಗಿದೆ. ಚಿತ್ರದ ಕಥೆ, ಶೈಲಿ (Genre) ಹಾಗೂ ಪಾತ್ರವರ್ಗದ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇತ್ತೀಚೆಗೆ ನಡೆದ ‘ಅಮೇರಿಕಾ ಅಮೇರಿಕಾ ೨’ ಕಾರ್ಯಕ್ರಮದಲ್ಲಿ ನಿರೂಪ್ ಭಂಡಾರಿ ಭಾಗವಹಿಸದೇ ಇದ್ದದ್ದು ಈ ಶೂಟಿಂಗ್‌ಗೆ ಸಂಬಂಧಿಸಿದೆ ಎನ್ನಲಾಗುತ್ತಿದೆ.

ಶ್ರೀನಿಧಿ ಶೆಟ್ಟಿ ಕಮ್‌ಬ್ಯಾಕ್?

ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ‘ಕೆ.ಜಿ.ಎಫ್’ ಖ್ಯಾತಿಯ ಶ್ರೀನಿಧಿ ಶೆಟ್ಟಿ ಈ ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಎನ್ನಲಾಗಿದೆ. ‘ಕೆ.ಜಿ.ಎಫ್: ಚಾಪ್ಟರ್ ೨’ ನಂತರ ತಮಿಳು (ಕೋಬ್ರಾ) ಹಾಗೂ ತೆಲುಗು (ಹಿಟ್: ದಿ 3ರ್ಡ್ ಕೇಸ್, ತಿಳುಸು ಕಡ) ಸಿನಿಮಾಗಳಲ್ಲಿ ನಿರತರಾಗಿದ್ದ ಶ್ರೀನಿಧಿ, ಈ ಹೊಸ ಪ್ರಾಜೆಕ್ಟ್ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುವುದು ಪ್ರೇಕ್ಷಕರಲ್ಲಿ ಕಾತರ ಹೆಚ್ಚಿಸಿದೆ.

ಭಂಡಾರಿ ಬ್ರದರ್ಸ್ 4ನೇ ಸಿನಿಮಾ

ಇದು ಅನುಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಕಾಂಬಿನೇಷನ್‌ನ ೪ನೇ ಸಿನಿಮಾವಾಗಿದೆ.

  • ರಂಗಿತರಂಗ – ಬ್ಲಾಕ್‌ಬಸ್ಟರ್ ಎಂಟ್ರಿ
  • ರಾಜರಥ – ರೊಮ್ಯಾಂಟಿಕ್ ಕಾಮಿಡಿ
  • ವಿಕ್ರಾಂತ್ ರೋಣ – ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್
  • ಹೊಸ ಪ್ರಾಜೆಕ್ಟ್ – ಶೂಟಿಂಗ್ ಪ್ರಗತಿಯಲ್ಲಿದೆ

ಭ್ಯುಸಿ ಶschedule ನಲ್ಲಿ ಇಬ್ಬರೂ ಕಲಾವಿದರು

ನಟ ನಿರೂಪ್ ಭಂಡಾರಿ ಕೈಯಲ್ಲಿ ಪ್ರಸ್ತುತ ‘ಅಮೇರಿಕಾ ಅಮೇರಿಕಾ ೨’, ‘ಅತಿಕಾಯ’ ಮತ್ತು ‘ಸತ್ಯ S/o ಹರೀಶ್ಚಂದ್ರ’ ಸಿನಿಮಾಗಳಿವೆ. ಇನ್ನೊಂದೆಡೆ ನಿರ್ದೇಶಕ ಅನುಪ್ ಭಂಡಾರಿ, ಕಿಚ್ಚ ಸುದೀಪ್ ಅವರ ಬೃಹತ್ ಬಜೆಟ್‌ನ ‘ಬಿಲ್ಲ ರಂಗ ಬಾಷಾ’ ಸೆಟ್‌ಗಳ ಕೆಲಸಗಳ ನಡುವೆಯೇ ಈ ಹೊಸ ಸಿನಿಮಾವನ್ನು ಸರಿದೂಗಿಸುತ್ತಿದ್ದಾರೆ.

Leave a Reply

Your email address will not be published. Required fields are marked *